ಶುಕ್ರವಾರ, ಫೆಬ್ರವರಿ 28, 2020

೨೦೨೦ನೇ ಸಾಲಿನ ಬಜೆಟ್ ಅನುಮೋದನೆ
ಯಾದಗಿರಿ, ಫೆಬ್ರವರಿ ೨೮ (ಕರ್ನಾಟಕ ವಾರ್ತೆ): ಯಾದಗಿರಿ ನಗರಸಭೆೆ ೨೦೨೦-೨೧ನೇ ಸಾಲಿನ ಆಯವ್ಯಯ ಬಜೆಟ್ ಮಂಡನೆಯ ಮುಂಗಡ ಪತ್ರವನ್ನು ತಯಾರಿಸಿ, ಪೂರ್ವಭಾವಿಯಾಗಿ ಸಲಹೆ ಸೂಚನೆ ಪಡೆಯಲು ನಗರಸಭೆ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳÀ ಅಧ್ಯಕ್ಷತೆಯಲ್ಲಿ ಹಾಗೂ ಸಾರ್ವಜನಿಕರು, ನಗರಸಭೆ ಪ್ರತಿನಿಧಿಗಳ ಸಮಕ್ಷಮದಲ್ಲಿ ಜನವರಿ ೨೦ರಂದು ಜರುಗಿದ ಸಭೆಯಲ್ಲಿ ಬಜೆಟ್ ಮಂಡಿಸಲಾಯಿತು. ಸಾರ್ವಜನಿಕರ ಸಲಹೆ ಸೂಚನೆ ಮೆರೆಗೆ ಫೆಬ್ರವರಿ ೨೦ರಂದು ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆಯವ್ಯಯಬಜೆಟ್‌ಗೆ ಅನುಮೋದನೆ ನೀಡಿದ್ದಾರೆ. ಈ ಭಾರಿಯ ಆಯವ್ಯಯ ಬಜೆಟ್ ನಗರಸಭೆಯ ಕೊರತೆಯ ಅನುದಾನ ೨.೭೮ ಲಕ್ಷಗಳು ಇರುತ್ತದೆ. ಬಜೆಟ್‌ನಲ್ಲಿ ಸಂಪನ್ಮೂಲ ಕ್ರೂಢೀಕರಿಸುವುದು, ನೂತನ ನಗರಸಭೆಯ ಕಟ್ಟಡ ನಿರ್ಮಾಣ ಮಾಡುವುದು, ಶುದ್ಧ ನೀರು ಪೂರೈಕೆ ಮಾಡುವುದು, ಶೌಚಾಲಯ ನಿರ್ಮಾಣಕ್ಕೆ ಧನ ಸಹಾಯ ನೀಡುವುದು ಹಾಗೂ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುವ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಯಿತು. 

ಪಿಯುಸಿ ವಾರ್ಷಿಕ ಪರೀಕ್ಷೆ ಜಾಗೃತದಳ ನೇಮಕ
ಯಾದಗಿರಿ, ಫೆಬ್ರುವರಿ ೨೮ (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಮಾರ್ಚ್ ೪ರಿಂದ ೨೩ರವರೆಗೆ ಬೆಳಿಗ್ಗೆ ೧೦ರಿಂದ ಮದ್ಯಾಹ್ನ ೧.೩೦ರವರೆಗೆ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಯಲು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಜಾಗೃತದಳ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿಗಳನ್ನು ಸರ್ಕಾರಿ ಪಿಯು ಕಾಲೇಜು ಯಾದಗಿರಿಗೆ ನೇಮಕ ಮಾಡಲಾಗಿದೆ. ಮೊ. ೯೦೦೮೩೬೨೭೮೨, ಯಾದಗಿರಿ ತೋಟಗಾರಿಕೆ ಉಪನಿದೇರ್ಶಕರನ್ನು ನ್ಯೂ ಕನ್ನಡ ಸಂಯುಕ್ತ ಪಿಯು ಕಾಲೇಜಿಗೆ ನೇಮಕ ಮಾಡಲಾಗಿದೆ. ಮೊ: ೮೨೭೭೯೩೩೪೦೧, ಯಾದಗಿರಿ ಪಶು ಸಂಗೋಪನೆ ಮತ್ತು ಪಶು ವೈದ್ಯ ಇಲಾಖೆ ಉಪನಿರ್ದೇಶಕರನ್ನು ರಿಲಿಜಿಯಸ್ ಮೈನಾರಿಟಿ ಪಿಯು ಕಾಲೇಜು ಯಾದಗಿರಿಗೆ ನೇಮಕ ಮಾಡಲಾಗಿದೆ ಮೊ:೯೪೪೮೬೫೧೨೧೨, ಯಾದಗಿರಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರನ್ನು ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಯಾದಗಿರಿಗೆ ನೇಮಕ ಮಾಡಲಾಗಿದೆ ಮೊ: ೯೪೪೮೮೩೦೨೭೭, ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳನ್ನು ಗುರುಮಿಠಕಲ್ ಸರ್ಕಾರಿ ಪಿಯು ಕಾಲೇಜಿಗೆ ನೇಮಕ ಮಾಡಲಾಗಿದೆ ಮೊ: ೯೯೮೦೧೧೩೨೯೦, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರನ್ನು ಶಹಾಪೂರ ತಾಲ್ಲೂಕಿನ ಸರ್ಕಾರಿ ಪಿಯು ಕಾಲೇಜಿಗೆ ನೇಮಕ ಮಾಡಲಾಗಿದೆ ಮೊ: ೯೪೪೯೨೭೦೩೧೪, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳನ್ನು ಶಹಾಪೂರ ತಾಲ್ಲೂಕಿನ ಸರ್ಕಾರಿ ಪಿಯು ಕಾಲೇಜಿನ ಭೀüಮರಾಯಗುಡಿಗೆ ನೇಮಕ ಮಾಡಲಾಗಿದೆ ಮೊ: ೭೨೫೯೪೪೦೪೦೦, ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮ ನಿಯಮಿತ ಜಿಲ್ಲಾ ವ್ಯವಸ್ಥಾಪಕರನ್ನು ಶಹಾಪೂರ ತಾಲ್ಲೂಕಿನ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿಗೆ ನೇಮಕ ಮಾಡಲಾಗಿದೆ ಮೊ: ೯೯೮೦೩೯೮೦೧೫, ಯಾದಗಿರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಂಶುಪಾಲರನ್ನು ಹುಣಸಗಿ ತಾಲ್ಲೂಕಿನ ಸರ್ಕಾರಿ ಪಿಯು ಕಾಲೇಜು ಹುಣಸಿಗಿಗೆ ನೇಮಕ ಮಾಡಲಾಗಿದೆ ಮೊ: ೯೧೦೮೦೮೮೮೬೫, ಯುವಜನ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸುರಪುರ  ಸರ್ಕಾರಿ ಪಿಯು ಕಾಲೇಜಿಗೆ ನೇಮಕ ಮಾಡಲಾಗಿದೆ. ಮೊ: ೯೪೪೯೯೬೭೫೬೧, ಜಿಲ್ಲಾ ಅಂಕಿತ ಅಧಿಕಾರಿಗಳನ್ನು (ಆಹಾರ ಸುರಕ್ಷತಾ ಅಧಿಕಾರಿಗಳು) ಸುರಪುರ ತಾಲ್ಲೂಕಿನ ಪ್ರಭು ಎ&ಎಸ್ & ಸಿ.ಪಿ.ಯು ಕಾಲೇಜಿಗೆ ನೇಮಕ ಮಾಡಲಾಗಿದೆ ಮೊ: ೯೧೬೪೩೨೨೯೯, ೮೩೧೦೬೩೨೧೩೭, ಸುರಪುರ ತಾಲ್ಲೂಕಿನ   ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರನ್ನು ಸುರಪುರದ ತಾಲ್ಲೂಕಿನ ಕೆಂಭಾವಿ ಸರ್ಕಾರಿ ಪಿಯು ಕಾಲೇಜಿಗೆ ನೇಮಕ ಮಾಡಲಾಗಿದೆ ಮೊ: ೮೬೬೦೭೮೯೩೪೨, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿಯನ್ನು ಸುರಪುರ ತಾಲ್ಲೂಕಿನ ರಂಗAಪೇಠ ಅಂಬೇಡ್ಕರ್ ಸ್ವತಂತ್ರ ಪಿಯು ಕಾಲೇಜಿಗೆ ನೇಮಕ ಮಾಡಲಾಗಿದೆ ಮೊ: ೯೯೦೨೧೯೩೩೨೫.
ಎಲ್ಲ ಅಧಿಕಾರಿಗಳು ತಮಗೆ ವಹಿಸಲಾದ ಪರೀಕ್ಷಾ ಕೇಂದ್ರಕ್ಕೆ ಖುದ್ದಾಗಿ ಹಾಜರಾಗಬೇಕು. ಪರೀಕ್ಷಾ ಕೇಂದ್ರದೊಳಗೆ ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್‌ನ್ನು ತೆಗೆದುಕೊಂಡು ಹೋಗಬಾರದು ಎಂದು ಅವರು ತಿಳಿಸಿದ್ದಾರೆ.
.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...