ಗುರುವಾರ, ಫೆಬ್ರವರಿ 27, 2020

ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಯಾದಗಿರಿ, ಫೆಬ್ರುವರಿ 27 (ಕರ್ನಾಟಕ ವಾರ್ತೆ): 2019-20 ನೇ ಸಾಲಿಗೆ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಆರ್ಯ ವೈಶ್ಯ ಸಮುದಾಯದವರಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ ಹಾಗೂ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳಿಂದ ಅಗತ್ಯ ದಾಖಲೆಗಳೊಂದಿಗೆ ಆನ್‍ಲೈನ್ ಮೂಲಕ ಅರ್ಜಿ  ಆಹ್ವಾನಿಸಲಾಗಿದೆ.
ಮಹಿಳೆಯರಿಗೆ ಶೇ.33ರಷ್ಟು ಮತ್ತು ವಿಶೇಷಚೇತನರಿಗೆ ಶೇ. 5ರಷ್ಟು ಮೀಸಲಾತಿ ಇರುತ್ತದೆ. ಅರ್ಜಿ ಸಲ್ಲಿಸಲು ಮಾರ್ಚ 12 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ 94484 51111, ಇ-ಮೇಲ್ support.kacdc@karnataka.gov.in ಯೋಜನೆಗಳ ಮಾರ್ಗಸೂಚಿಗಳು ಹಾಗೂ ಸಲ್ಲಿಸಬೇಕಾದ ದಾಖಲಾತಿಗಳ ವಿವರಗಳನ್ನು ಪಡೆಯಲು www.kacdc.karnataka.gov.in ಸಂಪರ್ಕಿಸಬಹುದು ಎಂದು ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವ್ಯವಸ್ತಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಧನೆಯ ಹಾದಿಯಲ್ಲಿ ಯುವಕರು ಹೆಜ್ಜೆ ಇಡಬೇಕು

ಯಾದಗಿರಿ, ಫೆಬ್ರುವರಿ 27 (ಕರ್ನಾಟಕ ವಾರ್ತೆ): ಇಂದಿನ ಯುವಜನತೆ ತಮ್ಮ ಆಸೆ, ಆಕಾಂಕ್ಷೆ ಈಡೇರಿಸಿಕೊಳ್ಳಲಾಗದೇ ಅನಿಶ್ಚಿತ ಸಮಯ  ಸಂದರ್ಭಕ್ಕೆ  ಸಿಲುಕಿ ಬದುಕಿನ ಅನ್ಯ  ಮಾರ್ಗವನ್ನು  ತುಳಿದು ತಮ್ಮ ಜೀವನದ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಯುವ ಪರಿವರ್ತಕರಾದ ಶಿಲ್ಪಾದೇವಿ ಅವರು ಹೇಳಿದರು.
ಇತ್ತೀಚೆಗೆ ಜಿಲ್ಲೆಯ ಸುರಪುರÀ ತಾಲ್ಲೂಕಿನ ಶ್ರೀ ಜನನಿ ಮಹಿಳಾ ಕಲಾ ಮಹಾವಿದ್ಯಾಲಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ “ಜೀವನ ಕೌಶಲ್ಯ ಹಾಗೂ ಯುವ ಸ್ಪಂದನ ಅರಿವು” ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ಯುವಕರು ತಮ್ಮ ಜೀವನದ ನಿಶ್ಚಿತ ಗುರಿ ನಿರ್ಧರಿಸಿರುವುದಿಲ್ಲ. ಗುರಿ ಇದ್ದರೂ ಅದನ್ನು ಹೇಗೆ ತಲುಪಬೇಕು ಎಂದು ತಿಳಿಯದೇ ಒತ್ತಡದ ಸ್ಥಿತಿಯಲ್ಲಿರುತ್ತಾರೆ. ಆ ಒತ್ತಡದಲ್ಲಿಯೇ ತಮ್ಮ ಬದುಕನ್ನು ಇನ್ನಷ್ಟು ಹಾಳು ಮಾಡಿಕೊಳ್ಳುತ್ತಾರೆ. ಇದರಿಂದ ಅವರ ಜೀವನದ ಗುರಿಯೇ ಬೇರೆ, ಮಾಡುವಂತ ಕೆಲಸವೇ ಬೇರೆ ಹೀಗಾಗಿ ಮಾಡುವ ಕೆಲಸದಲ್ಲಿ ಆಸಕ್ತಿಯಿರದೇ ತಮಗರಿಯದ ದಾರಿಯಲ್ಲಿ ಬದುಕು ಸಾಗಿಸುತ್ತಿರುತ್ತಾರೆ. 
ಇನ್ನು ಇದರ ಪರಿಣಾಮದಿಂದ ಸ್ನೇಹಿತರು ಹಾಗೂ ಸಂಬಂಧಿಕರು, ಸಮಾಜದ ಜೊತೆಗೆ ಸಹಬಾಳ್ವೆಯಿಂದ ಇರಲಾಗದೇ ಒಂಟಿಯಾಗಿ ಇರಬೇಕಾದ ಸಂಗತಿ ಸೃಷ್ಟಿಯಾಗುತ್ತದೆ. ಇಂಥ ಸಮಸ್ಯೆಗಳ ಬಗ್ಗೆ ಯುವ ಜನರಿಗೆ ಅರಿವು ಮೂಡಿಸಿದುವುದ ಜೊತೆಗೆ ಆಪ್ತ ಸಮಾಲೋಚನೆ ಮೂಲಕ ಪರಿಹಾರ ಮೂಡಿಸು ಕಾರ್ಯಕ್ರಮವೇ ಈ ಯುವ ಸ್ಪಂದನ ಕಾರ್ಯಕ್ರಮ ಎಂದು ಹೇಳಿದರು.
ಇನ್ನು ಈ ಕಾರ್ಯಕ್ರಮದಲಿ ಶ್ರೀ ಜನನಿ ಮಹಿಳಾ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಸವರಾಜೇಶ್ವರಿ ಘಂಟಿ, ಉಪನ್ಯಾಸಕ ಆದಿಶೇಷ ನಿಲಗಾರ, ಬೀರಲಿಂಗ ಕೊಡೆಸೂರ, ಸುವರ್ಣ ಆವಂಟಿ, ಶ್ರೀದೇವಿ ನಾಯಕ, ಯುವ ಪರಿವರ್ತಕರಾದ  ಶೀಲ್ಪಾ ಹರಸೂರ್  ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...