ಬುಧವಾರ, ಫೆಬ್ರವರಿ 26, 2020

ಇಂದಿನಿAದ ಜಿಲ್ಲೆಯಲ್ಲಿ ಜನಗಣತಿ ಕಾರ್ಯಚರಣೆ ತರಬೇತಿ 
ಯಾದಗಿರಿ, ಫೆಬ್ರುವರಿ ೨೬ (ಕರ್ನಾಟಕ ವಾರ್ತೆ):- ೨೦೨೧ನೇ ಸಾಲಿನ ಜನಗಣತಿಯ ಅಂಗವಾಗಿ ಜಿಲ್ಲಾಧಿಕಾರಿಗಳಾದ ಎಂ. ಕೂರ್ಮಾ ರಾವ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ಚಾರ್ಜ್ ಅಧಿಕಾರಿಗಳಾದ ತಹಸೀಲ್ದಾರರು, ಚೀಫ್ ಆಫಿರ‍್ಸ್ ಹಾಗೂ ನಗರಸಭೆ ಮುಖ್ಯಾಧಿಕಾರಿಗಳಿಗೆ ಎರಡು ದಿನದ ಜನಗಣತಿ ಕಾರ್ಯಚರಣೆ ತರಬೇತಿಯನ್ನು ಫೆಬ್ರುವರಿ ೨೭ ಹಾಗೂ ೨೮ರಂದು  ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜನಗಣತಿ ಕಾರ್ಯಾಚರಣೆ ತರಬೇತಿಯನ್ನು ಫೆ.೨೭ರ ಬೆಳಿಗ್ಗೆ ೧೦ ಗಂಟೆಗೆ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಚಾಲನೆ ನೀಡಲಾಗುವುದು. 
ರಾಷ್ಟಿçÃಯ ಜನಗಣತಿ ಇಲಾಖೆಯ ಉಪನಿರ್ದೇಶಕರಾದ ಎಸ್.ಚಿನ್ನದೊರೆ ಹಾಗೂ ಯಾದಗಿರಿ ಜಿಲ್ಲಾ ನೂಡಲ್ ಅಧಿಕಾರಿಗಳಾದ ಗೋಪಾಲ್‌ಕೃಷ್ಣ ಅವರು ತರಬೇತಿ ನೀಡಲಿದ್ದಾರೆ.
ಜಿಲ್ಲಾಧಿಕಾರಿಗಳಾದ ಎಂ. ಕೂರ್ಮಾ ರಾವ್ ಅವರು ಫ್ರಿನ್ಸಿಫಲ್ ಆಫಿಸರ್ ಆಗಿರುತ್ತಾರೆ. ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ.ರಜಪೂತ ಅವರು ಜಿಲ್ಲಾ ಜನಗಣತಿ ಅಧಿಕಾರಿಗಳಾಗಿರುತ್ತಾರೆ. ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳು ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಹೆಚ್ಚುವರಿ ಜಿಲ್ಲಾ ಜನಗಣತಿ ಅಧಿಕಾರಿಗಳಾಗಿರುತ್ತಾರೆ. ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಅವರು ಉಪ ವಿಭಾಗ ಜನಗಣತಿ ಚಾರ್ಜ್ ಅಧಿಕಾರಿಗಳಾಗಿರುತ್ತಾರೆ.
ಎಲ್ಲಾ ತಹಸೀಲ್ದಾರರು ಗ್ರಾಮೀಣ ಜನಗಣತಿ ಅಧಿಕಾರಿಗಳಾಗಿ ನೇಮಕಗೊಂಡಿರುತ್ತಾರೆ. ನಗರಸಭೆ ಹಾಗೂ ಪುರಸಭೆ ಅಧಿಕಾರಿಗಳು ನಗರ ಪ್ರದೇಶದ ಜನಗಣತಿ ಚಾರ್ಜ್ ಅಧಿಕಾರಿಗಳಾಗಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಎಸಿಬಿ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಯಾದಗಿರಿ, ಫೆಬ್ರುವರಿ ೨೬ (ಕರ್ನಾಟಕ ವಾರ್ತೆ):- ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಜಿಲ್ಲೆಯ ವಿವಿಧೆಡೆ ಜನಸಂಪರ್ಕ ಸಭೆ ನಡೆಸಿ ಅರ್ಜಿ ಅಹವಾಲು ಸ್ವೀಕಾರ ಮಾಡಲಿದ್ದು, ನಿಗದಿಪಡಿಸಿದ ದಿನಾಂಕಗಳAದು ಸಾರ್ವಜನಿಕರು ಅಧಿಕಾರಿಗಳನ್ನು ಭೇಟಿಯಾಗಿ ಭ್ರಷ್ಟಾಚಾರಕ್ಕೆ ಸಂಬAಧಿಸಿದAತೆ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.
ಭ್ರಷ್ಟಾಚಾರ ನಿಗ್ರಹ ದಳದ ಡಿಎಸ್‌ಪಿ ಡಾ.ಸಂತೋಷ ಕೆ.ಎಂ (೯೪೮೦೮ ೦೬೨೪೨), ಪೊಲೀಸ್ ಇನ್‌ಸ್ಪೆಕ್ಟರ್ ಬಾಬಾಸಾಹೇಬ ಪಾಟೀಲ್ (ಮೊ:೯೪೮೦೮ ೦೬೩೧೩), ಪೊಲೀಸ್ ಇನ್‌ಸ್ಪೆಕ್ಟರ್ ಗುರುಪಾದ ಎಸ್.ಬಿರಾದಾರ (ಮೊ:೯೪೮೦೮ ೦೬೩೧೪) ಅವರು ಅಹವಾಲು ಸ್ವೀಕರಿಸುವರು. ಫೆಬ್ರುವರಿ ೨೭ರಂದು ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೨ಗಂಟೆ ವರೆಗೆ ವಾಗಣಗೇರಾ ಗ್ರಾಮ ಪಂಚಾಯಿತಿ ಕಾರ್ಯಲಯದಲ್ಲಿ ಹಾಗೂ ಫೆಬ್ರುವರಿ ೨೮ರಂದು ಗುರುಮಠಕಲ್ ತಾಲ್ಲೂಕಿನ ಕೊಂಕಲ್ ನಾಡಕಚೇರಿಯಲ್ಲಿ ಅಹವಾಲು ಸ್ವೀಕರಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಹಿರಂಗ ಹರಾಜು
ಯಾದಗಿರಿ, ಫೆಬ್ರುವರಿ ೨೬ (ಕರ್ನಾಟಕ ವಾರ್ತೆ):- ಶಹಾಪೂರ ನಗರ ಸಭೆ ಆವರಣದಲ್ಲಿರುವ ನೀರು ಸರಬರಾಜು ಮತ್ತು ವಿದ್ಯುತ್ ನೈರ್ಮಲ್ಯ ಶಾಖೆಯ ಅನುಪಯುಕ್ತ ಸಾಮಾಗ್ರಿಗಳ ಬಹಿರಂಗ ಹರಾಜು ಪ್ರಕ್ರಿಯೆ ಮಾರ್ಚ್ ೩ರಂದು ಬೆಳಿಗ್ಗೆ ೧೨ ಗಂಟೆಗೆ ನಗರಸಭೆ ಆವರಣದಲ್ಲಿ ನಡೆಯಲಿದೆ ಹೆಚ್ಚಿನ ಮಾಹಿತಿಗೆ ಶಹಾಪೂರ ನಗರಸಭೆ ಪೌರಾಯುಕ್ತರನ್ನು ಸಂಪರ್ಕಿಸಬಹುದಾಗಿದೆ.

ಆಕ್ಷೇಪಣೆಗೆ ಆಹ್ವಾನ
ಯಾದಗಿರಿ, ಫೆಬ್ರುವರಿ ೨೬ (ಕರ್ನಾಟಕ ವಾರ್ತೆ):- ಶಾಹಪೂರ ನಗರಸಭೆ ವ್ಯಾಪ್ತಿಯ ಹಳಪೇಟ ರಸ್ತೆಯ ಪೊಲೀಸ್ ಸ್ಟೇಷನ್ ಹತ್ತಿರ ಬರುವ  ಆಸ್ತಿ ಸಂಖ್ಯೆ ೨-೫೩/೧ ಸ್ವತ್ತಿನ ಸಂಖ್ಯೆ ೨-೫೦೧-೧೩೪ ಸೈಯದ್ ದರ್ಗಾ ಹಜರತ ಸೈಯದ ಅಸನ ಸಲಾರ ಹೆಸರಲ್ಲಿರುವ ವಕ್ಫ ಆಸ್ತಿಯ ಕಟ್ಟಡ  ಇದ್ದು, ಆಸ್ತಿಯ ಒಟ್ಟು ವಿಸ್ತೀರ್ಣ ೧೮೧.೫೦ ಚ.ಮೀ ಕಟ್ಟಡ ೧೩.೭೫ ಚ.ಮೀ ದಾಖಲಿದ್ದು, ಪ್ರಸ್ತುತ ಸದರಿ ಆಸ್ತಿಯ ಕಂಪೌAಡ್ ನಿರ್ಮಾಣ ಮಾಡಲು ಪರವಾನಿಗೆಗಾಗಿ ಆಸ್ತಿಗೆ ಸಂಬAಧಿಸಿದ ಮುತವಲ್ಲಿಯವರು ಆನ್‌ಲೈನ್ ಅರ್ಜಿ ಸಲ್ಲಿಸಿರುತ್ತಾರೆ.
ಜಿಲ್ಲಾ ವಕ್ಫ್ ಅಧಿಕಾರಿಗಳು ಕಾಂಪೌಡ್ ನಿರ್ಮಾಣಕ್ಕಾಗಿ ಪರವಾನಿಗೆಗೆ ಕೋರಿದ್ದು, ಈ ಹಿನ್ನೆಲೆಯಲ್ಲಿ ಸದರಿ ಆಸ್ತಿಯ ಕಾಂಪೌAಡ್ ನಿರ್ಮಾಣ ಮಾಡಲು ಯಾವುದಾದರು ಆಕ್ಷೇಪಣೆಗಳು ಇದ್ದಲ್ಲಿ ೧೫ ದಿನಗಳ ಒಳಗಾಗಿ ದೂರು ಸಲ್ಲಿಸಬೇಕು. ನಿಗದಿತ ಅವಧಿಯ ನಂತರ ಬಂದ ದೂರುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಶಹಾಪುರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲ ಆಸ್ತಿ ತೆರಿಗೆ ಮೇಲೆ ದರ ಪರಿಷ್ಕರಣೆ  
ಯಾದಗಿರಿ, ಫೆಬ್ರುವರಿ ೨೬ (ಕರ್ನಾಟಕ ವಾರ್ತೆ):- ಜಿಲ್ಲೆಯ ಸುರಪುರ ನಗರಸಭೆ ವ್ಯಾಪ್ತಿಯಲ್ಲಿ ಬರುವ ಆಸ್ತಿ ಮಾಲೀಕರಿಗೆ ಪೌರಾಡಳಿತ ನಿರ್ದೇಶನಾಲಯ ೨೦೧೯ರ ಸೆಪ್ಟೆಂಬರ್ ೨೭ರಿಂದ ಹಣಕಾಸು ವರ್ಷದಿಂದ ಪ್ರಾರಂಭಿಸಿ ಪ್ರತಿ ೩ ವರ್ಷಕ್ಕೊಮ್ಮೆ ಮೂಲ ಆಸ್ತಿ ತೆರಿಗೆ ಮೇಲೆ ಶೇ.೧೫ ರಿಂದ ೩೦ರಷ್ಟು ಹೆಚ್ಚಳ ಮಾಡಬೇಕಾಗಿರುವುದರಿಂದ ದರ ಪರಿಷ್ಕರಣೆಯನ್ನು ೨೦೨೦-೨೧ನೇ ಸಾಲಿನಿಂದ  ಅನ್ವಯವಾಗುವಂತೆ ಕ್ರಮಕೈಗೊಳ್ಳಲಾಗುತ್ತಿದೆ.
ಈ ಬಗ್ಗೆ ತಕರಾರು ಇದ್ದಲ್ಲಿ ಮಾರ್ಚ್ ೫ರೊಳಗಾಗಿ ಲಿಖಿತವಾಗಿ ಆಕ್ಷೇಪಣೆಗಳನ್ನು ನಗರಸಭೆ ಕಾರ್ಯಲಯದ ಕಂದಾಯ ಶಾಖೆಯಲ್ಲಿ ಸಲ್ಲಿಸಬೇಕು. ಕೊನೆಯ ದಿನದ ನಂತರ ಬರುವ ಯಾವುದೇ ಆಕ್ಷೇಪಣೆಗಳು ಸ್ವೀಕರಿಸುವುದಿಲ್ಲವೆಂದು ಸುರುಪುರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...