ಬುಧವಾರ, ಫೆಬ್ರವರಿ 19, 2020

ಮಕ್ಕಳಲ್ಲಿ ಶಿಸ್ತು ಕಲಿಸುವುದೆ ಎಸ್‍ಪಿಸಿ ಉದ್ದೇಶ
  -ಡಿವೈಎಸ್‍ಪಿ ಯು.ಶರಣಪ್ಪ
ಯಾದಗಿರಿ, ಫೆಬ್ರುವರಿ 19 (ಕರ್ನಾಟಕ ವಾರ್ತೆ): ಮಕ್ಕಳಲ್ಲಿ ಶಿಸ್ತು, ತ್ಯಾಗ, ನಿμÉ್ಠ ಮೂಡಿಸುವುದೇ ಸ್ಟುಡೆಂಟ್ ಪೆÇಲೀಸ್ ಕೆಡೆಟ್ (ಎಸ್‍ಪಿಸಿ) ಉದ್ದೇಶವಾಗಿದೆ ಎಂದು ಡಿವೈಎಸ್‍ಪಿ ಯು.ಶರಣಪ್ಪ ಅವರು ಹೇಳಿದರು. ನಗರದ ಹೊರ ವಲಯದಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ರಾಜ್ಯ ಪೆÇಲೀಸ್ ಇಲಾಖೆಯ ಕೆಎಸ್‍ಆರ್‍ಪಿ ಕಮಾಂಡೆಟ್ 6ನೇ ಪಡೆ ಕಲಬುರಗಿ ವತಿಯಿಂದ ಮಕ್ಕಳಿಗೆ ಹಮ್ಮಿಕೊಂಡಿದ್ದ ಸ್ಟುಡೆಂಟ್ ಪೆÇಲೀಸ್ ಕೆಡೆಟ್‍ನ ಹನ್ನೊಂದು ವಾರಗಳ ಸಾಪ್ತಾಹಿಕ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಕೇವಲ ಶಾರಿರೀಕ ಶಿಸ್ತು ಅಲ್ಲದೇ ಮಾನಸಿಕ ದೃಢತೆ, ಕಾನೂನುಗಳ ಬಗ್ಗೆ ಜ್ಞಾನ, ದೇಶದ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುವುದು ಕೂಡ ಈ ಸ್ಟುಡೆಂಟ್ ಪೆÇಲೀಸ್ ಕೆಡೆಟ್ ಉದ್ದೇಶವಾಗಿದೆ. ಇದರಿಂದ ಮಕ್ಕಳಲ್ಲಿ ಸಮಾಜಿಕ ಜಾಗೃತಿ ಮೂಡುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹನ್ನೊಂದು ವಾರಗಳ ತರಬೇತಿಯ ನೋಡಲ್ ಅಧಿಕಾರಿಗಳಾದ ಮತ್ತು ಎಎಸ್‍ಐ ಸತ್ಯನಾರಾಯಣರಾವ್ ಅವರು ತಮ್ಮ ಅನುಭವ ಹಂಚಿಕೊಂಡರು. ಮಕ್ಕಳಲ್ಲಿ ಇಂತಹ ವರ್ಗಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು. ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಮತ್ತು ಶೀಲ್ಟ್ ಎಸ್‍ಪಿಸಿ ಕಡೆಯಿಂದ ವಿತರಿಸಲಾಯಿತು. ತರಬೇತಿ ಪಡೆದ ಮಕ್ಕಳಿಗೆ ಪದಕ ವಿತರಿಸಲಾಯಿತು. ಮುಖ್ಯಗುರು ಭಗವಂತ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಎಲ್ಲಾ ಸಹಶಿಕ್ಷಕರು, ಸಿಬ್ಬಂದಿ ಮತ್ತು ಮಕ್ಕಳು ಭಾಗವಹಿಸಿದ್ದರು. ಬಾಲಕೃಷ್ಣ ಪ್ರಾರ್ಥಿಸಿದರೆ, ದೇವಿಂದ್ರಪ್ಪ ಸ್ವಾಗತಿಸಿದರು. ಮಹೇಶ ದೀಕ್ಷಿತ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...