ಗುರುವಾರ, ಫೆಬ್ರವರಿ 27, 2020

ರಾಷ್ಟಿçÃಯ ಜನಸಂಖ್ಯಾ ನೋಂದಣಿ ಪರಿಷ್ಕರಣೆಯ ತರಬೇತಿ ಕಾರ್ಯಗಾರ
‘ನಿಖರ ಮಾಹಿತಿ ಸಂಗ್ರಹಿಸಿ ಜನಗಣತಿ ಪಟ್ಟಿ ಸಿದ್ಧಪಡಿಸಿ’
-ಜಿಲ್ಲಾಧಿಕಾರಿಗಳು ಎಂ. ಕೂರ್ಮಾರಾವ್
ಯಾದಗಿರಿ, ಫೆಬ್ರುವರಿ ೨೭ (ಕರ್ನಾಟಕ ವಾರ್ತೆ): ಹಿಂದಿನ ೨೦೧೧ರ ಜನಗಣತಿ ಹಾಗೂ ಈಗ ಇರುವ ಜನಗಣತಿಗೆ ತುಂಬಾ ವ್ಯತ್ಯಾಸವಿದೆ. ಆನ್‌ಲೈನ್, ಮೊಬೈಲ್ ಆಪ್ ಹಾಗೂ ವಿವಿಧ ಸಿಸ್ಟಂಗಳ ಮೂಲಕ ಸರಿಯಾದ ಮಾಹಿತಿ ಸಂಗ್ರಹಿಸಿ ರಾಷ್ಟಿçÃಯ ಜನಸಂಖ್ಯಾ ನೋಂದಣಿ ಪರಿಷ್ಕರಣೆ ಪಟ್ಟಿ ತಯಾರಿಸಬೇಕೆಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾರಾವ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಮನೆಪಟ್ಟಿ, ಮನೆಗಣತಿ ಹಾಗೂ ರಾಷ್ಟಿçÃಯ ಜನಸಂಖ್ಯಾ ನೋಂದಣಿ ಪರಿಷ್ಕರಣೆಯ ಜಿಲ್ಲಾ, ತಾಲೂಕು, ನಗರ ಹಾಗೂ ಪಟ್ಟಣ ಅಧಿಕಾರಿಗಳ ೨ ದಿನ ನಡೆಯುವ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಂಪ್ಯೂಟರ್ ಆಧಾರಿತ ಹಾಗೂ ಮೊಬೈಲ್ ಆಪ್ ಮುಖಾಂತರ ಮಾಹಿತಿ ಸಂಗ್ರಹಿಸಬೇಕು. ಯಾಕೆಂದರೆ ಇಡೀ ದೇಶದಲ್ಲಿ ಜನಗಣತಿ ನೋಂದಣಿ ಪರಿಷ್ಕರಣೆ ನಡೆಯುತ್ತಿರುವುದರಿಂದ ಎಲ್ಲಾ ಜಿಲ್ಲೆಗಳು, ತಾಲೂಕುಗಳಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ಹೀಗಾಗಿ ಯಾರಿಂದ ಮಾಹಿತಿ ಬಂದಿಲ್ಲ, ಏಕೆ ತಡವಾಗಿ ಬರುತ್ತಿದೆ, ಮೊದಲು ಬಂದಿದ್ದು ಯಾವುದು, ಯಾರು ಸರ್ವೆ ತಡವಾಗಿ ಮಾಡಿದ್ದಾರೆಂದು ಮಾಹಿತಿ ದಿನನಿತ್ಯ ಸಂಗ್ರಹಿಸಬೇಕು ಎಂದು ತಿಳಿಸಿದರು. ರಾಷ್ಟಿçÃಯ ಜನಸಂಖ್ಯಾ ನೋಂದಣಿ ಪರಿಷ್ಕರಣೆಯ ಪಟ್ಟಿ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ಸೂಚಿಸಿದರು. ಅಲ್ಲದೇ ಪ್ರತಿಯೊಂದು ಕಾಲಂ, ಪ್ರತಿಯೊಂದು ಫಾರ್ಮೆಟ್ ಹಾಗೂ ಸಂಪೂರ್ಣ ವರದಿಯನ್ನು ತಿಳಿದುಕೊಂಡು ಮಾಹಿತಿ ನೀಡಬೇಕು. ಜೊತೆಗೆ ಆನ್‌ಲೈನ್, ಮೊಬೈಲ್ ಆಪ್ ಮೂಲಕ ಸರಿಯಾಗಿ ಮಾಹಿತಿ ಪಡೆದು ಜನಗಣತಿ ನೋಂದಣಿ ಪರಿಷ್ಕರಣೆ ಪಟ್ಟಿ ಸಿದ್ಧಪಡಿಸಬೇಕು ಎಂದರು. ಇದಲ್ಲದೇ ತರಬೇತಿಯಲ್ಲಿ ನೀವು ಚೆನ್ನಾಗಿ ತಿಳಿದುಕೊಂಡರೆ ನಿಮ್ಮ ಸಹದ್ಯೋಗಿಗಳು ಹಾಗೂ ಕೆಳ ಹಂತದ ಅಧಿಕಾರಿಗಳಿಗೆ ತಿಳಿಸಲು ಸಾಧ್ಯವಾಗುತ್ತದೆ ಎಂದರು. ಮೊದಲ ದಿನದ ರಾಷ್ಟಿçÃಯ ಜನಸಂಖ್ಯಾ ನೋಂದಣಿ ಪರಿಷ್ಕರಣೆ ಕಾರ್ಯಗಾರಕ್ಕೆ ಆಗಮಿಸಿದ್ದ ತಾಲೂಕಿನ ಎಲ್ಲಾ ತಹಶೀಲ್ದಾರರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಉಪನಿರ್ದೇಶಕರು ಮತ್ತು ರಾಷ್ಟಿçÃಯ ಜನಗಣತಿ ತರಬೇತಿದಾರರಾದ ಎಸ್.ಚಿನ್ನದೊರೆ ಅವರು ಜನಗಣತಿ ಪರಿಷ್ಕರಣೆ ಬಗ್ಗೆ ದತ್ತಾಂಶದ ಆಧಾರದ ಮೇಲೆ ಮಾಹಿತಿ ನೀಡಿದರು. ಇನ್ನು ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ, ಯಾದಗಿರಿ ನೋಡಲ್ ಅಧಿಕಾರಿ ಜಿ. ಗೋಪಾಲಕೃಷ್ಣ ಸೇರಿದಂತೆ ತಾಲೂಕಿನ ಎಲ್ಲಾ ತಹಶೀಲ್ದಾರರು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು. 
 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...