ಗುರುವಾರ, ಫೆಬ್ರವರಿ 18, 2021

 ಫೆ.23 ರಂದು ಸುರಪುರದಲ್ಲಿ ಉದ್ಯೋಗ ಮೇಳ

ಯಾದಗಿರಿ,ಫೆ.18(ಕ.ವಾ):- ರಾಷ್ಟಿçÃಯ ವೃತ್ತಿ ಸೇವಾ ಅಡಿಯಲ್ಲಿ (ಎನ್.ಸಿ.ಎಸ್) ಸುರಪುರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಫೆಬ್ರವರಿ 23 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆ ವರೆಗೆ  ಒಂದು ದಿನದ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐಟಿಐ, ಡಿಪ್ಲೋಮೋ, ಬಿಇ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಾಸಾದ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯ ನೀಡಲಾಗುವುದಿಲ್ಲ. 

ಹೆಚ್ಚಿನ ಮಾಹಿತಿಗೆ ಉದ್ಯೋಗ ವಿನಿಮಯ ಕಚೇರಿಗೆ ಹಾಗೂ ದೂರವಣಿ ಸಂಖ್ಯೆ 9448250868, 08473-253718 ಸಂಪರ್ಕಿಸಬಹುದಾಗಿದೆ.

ಸಶಸ್ತç ಪೊಲೀಸ್ ಕಾನ್ಸೆ÷್ಟÃಬಲ್ ನೇಮಕಾತಿ: ಅಂತಿಮ ಆಯ್ಕೆ ಪಟ್ಟಿ ಪ್ರಕಟ

ಯಾದಗಿರಿ.ಫೆ.18(ಕ.ವಾ):- ಯಾದಗಿರಿ ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ವೃಂದದ 46  ಸಶಸ್ತç ಪೊಲೀಸ್ ಕಾನ್ಸೆ÷್ಟÃಬಲ್ (ಪುರುಷ) ಹುದ್ದೆಗಳ ನೇಮಕಾತಿಗೆ ಸಂಬAಧಿಸಿದAತೆ  ಪಿಎಸ್‌ಟಿ ಮತ್ತು ಇಟಿ ಪರೀಕ್ಷೆಯಲ್ಲಿ ಗೈರುಹಾಜರಾದ ಮತ್ತು ಅನರ್ಹರಾದ ಅಭ್ಯರ್ಥಿಗಳ ಬದಲಿಗೆ ಬೇರೊಬ್ಬ (ಕೆಕೆ) ಅಭ್ಯರ್ಥಿಗಳನ್ನು ಪರಿಗಣಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಈ ಹುದ್ದೆಗಳ ನೇಮಕಾತಿಗೆ 2020ರ ಅಕ್ಟೋಬರ್ 18 ರಂದು ಯಾದಗಿರಿ ನಗರದಲ್ಲಿ ಲಿಖಿತ ಪರಿಕ್ಷೆಯನ್ನು ನಡೆಸಿ ಲಿಖಿತ ಪರೀಕ್ಷೆಯಲ್ಲಿ 1:5 ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ 2020ರ ಡಿಸೆಂಬರ್ 17 ರಿಂದ 24ರ ವರೆಗೆ ಪಿಎಸ್‌ಟಿ ಮತ್ತು ಇಟಿ ಪರೀಕ್ಷೆಯನ್ನು ನಡೆಸಲಾಗಿತ್ತು.

 ಪಿಎಸ್‌ಟಿ ಮತ್ತು ಇಟಿ ಪರೀಕ್ಷೆಯಲ್ಲಿ ಗೈರುಹಾಜರಾದ ಮತ್ತು ಅನರ್ಹರಾದ ಅಭ್ಯರ್ಥಿಗಳ ಬದಲಿಗೆ ಬೇರೊಬ್ಬ (ಕೆ.ಕೆ) ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಂಡು ಇದೀಗ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಆಯ್ಕೆ ಪಟ್ಟಿಯನ್ನು ಜಿಲ್ಲಾ ಪೊಲೀಸ್ ಕಚೇರಿಯ ಸೂಚನಾ ಫಲಕದಲ್ಲಿ ಮತ್ತು ವೆಬ್‌ಸೈಟ್ ಥಿಚಿಜgiಡಿಠಿoಟiಛಿe.ಞಚಿಡಿಟಿಚಿಣಚಿಞಚಿ.gov.iಟಿ  ಮೂಲಕ ಅಭ್ಯರ್ಥಿಗಳು ನೋಡಬಹುದಾಗಿದೆ ಎಂದು ಯಾದಗಿರಿ ಪೊಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್ ಸೋನಾವಣೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜಿಲ್ಲೆಯ 14 ದೇವಸ್ಥಾನಗಳ ವ್ಯವಸ್ಥಾಪನ ಸಮಿತಿ ರಚನೆಗೆ ಅರ್ಜಿ ಆಹ್ವಾನ

ಯಾದಗಿರಿ.ಫೆ.18(ಕ.ವಾ):- ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಕಲಂ 25ರನ್ವಯ (ಪ್ರವರ್ಗ “ಎ” ಅಧಿಸೂಚಿತ) ಜಿಲ್ಲೆಯಲ್ಲಿರುವ ಪ್ರವರ್ಗ “ಬಿ” ಮತ್ತು “ಸಿ” ವರ್ಗದ ಅಧಿಸೂಚಿತ 14 ಸಂಸ್ಥೆಗಳಿಗೆ (ದೇವಸ್ಥಾನಗಳು) 9 ಸದಸ್ಯರ  ವ್ಯವಸ್ಥಾಪನಾ ಸಮಿತಿ ರಚನೆಗೆ ಆಸಕ್ತ ಭಕ್ತರಿಂದ ಅರ್ಜಿ ಆಹ್ವಾನಿಸಿದೆ.

ವ್ಯವಸ್ಥಾಪನಾ ಸಮಿತಿ ಸದಸ್ಯರ ಅವಧಿ 4 ವರ್ಷವಾಗಿದ್ದು, ಕನಿಷ್ಠ 25 ವರ್ಷ ವಯಸ್ಸಾಗಿರುವ ಆಸಕ್ತ ಭಕ್ತಾದಿಗಳು ನಿಗಧಿತ ನಮೂನೆ-1 (ಬಿ) ಅರ್ಜಿಯನ್ನು ಆಯಾ ತಹಶೀಲ್ದಾರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಈ ಪ್ರಕಟಣೆ ಹೊರಡಿಸಿದ 15 ದಿನದೊಳಗಾಗಿ ಸಂಬAಧಿಸಿದ ತಹಸೀಲ್ದಾರರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅವರು ತಿಳಿಸಿದ್ದಾರೆ.

ಪ್ರತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ 9 ಜನ ಸದಸ್ಯರನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಇದರಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು/ ಅರ್ಚಕರು, ಪ.ಜಾ/ಪ.ಪಂ. ಕನಿಷ್ಠ ಒಬ್ಬ ಸದಸ್ಯರು, ಇಬ್ಬರು ಮಹಿಳೆಯರು, ದೇವಸ್ಥಾನವಿರುವ ಪ್ರದೇಶದ ಸ್ಥಳೀಯ ಓರ್ವ ಗ್ರಾಮಸ್ಥರು ಹಾಗೂ ಇತರೆ 4 ಜನ ಸದಸ್ಯರನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಸದಸ್ಯರಾಗಬಯಸುವವರು ದೇವರಲ್ಲಿ ನಂಬಿಕೆವುಳ್ಳವರಾಗಿದ್ದು, ಸನ್ನಡತೆ ಹಾಗೂ ಗೌರವ ಕಾಯ್ದುಕೊಂಡಿರಬೇಕಾಗಿರುತ್ತದೆ.

ದೇವಸ್ಥಾನಗಳ ಪಟ್ಟಿ: ಶಹಾಪೂರ ತಾಲ್ಲೂಕಿನ ಭೀಮರಾಯನಗುಡಿಯ ಶ್ರೀ ಬಲಭೀಮೇಶ್ವರ ದೇವಸ್ಥಾನ, ದಿಗ್ಗಿ ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನ, ಶಹಾಪೂರ ಪಟ್ಟಣದ ಶ್ರೀ ಹನುಮಾನ ದೇವಸ್ಥಾನ, ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ, ಹೆಬ್ಬಾಳ(ಕೆ) ಗ್ರಾಮದ ಶ್ರೀ ಪರಮಾನಂದ ದೇವಸ್ಥಾನ, ಸುರಪೂರ ತಾಲೂಕಿನ ದೇವರಗೋನಾಳ ಗ್ರಾಮದ ಶ್ರೀ ಮೌನೇಶ್ವರ ದೇವಸ್ಥಾನ, ನಗನೂರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ, ಕಕ್ಕೇರಾ ಗ್ರಾಮದ ಶ್ರೀ ಸೋಮನಾಥ ದೇವಸ್ಥಾನ, ವಡಗೇರಾ ತಾಲೂಕಿನ ಹೈಯಾಳ(ಬಿ) ಗ್ರಾಮದ ಶ್ರೀ ಹೈಯಾಳಲಿಂಗೇಶ್ವರ ದೇವಸ್ಥಾನ, ಸಂಗಮ (ಡಿ) ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನ, ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದ ಶ್ರೀ ರಾಚಪ್ಪಯ್ಯ-ಕಡ್ಲಪಯ್ಯ ದೇವಸ್ಥಾನ ಹಾಗೂ ಇಡ್ಲೂರು ಗ್ರಾಮದ ಶ್ರೀ ಶಂಕರಲಿAಗೇಶ್ವರ ದೇವಸ್ಥಾನ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...