ಶನಿವಾರ, ಜುಲೈ 31, 2021

 ಕಾಣೆಯಾದ  ವ್ಯಕ್ತಿ ಪತ್ತೆಗೆ ಮನವಿ


ಯಾದಗಿರಿ: ಜುಲೈ,31 (ಕರ್ನಾಟಕ ವಾರ್ತಾ): ಯಾದಗಿರಿ ನಗರದ ಮಾತಾಮಾಣೀಕೇಶ್ವರಿ ನಗರ ನಿವಾಸಿ ನಗರದ ಶುಭಂ ಪೆಟ್ರೋಲ್ ಪಂಪ್ ಮೆನೇಜರ್  ಭರತಕುಮಾರ ಜೈನ (58) ಎಂಬವರು ಪೆಟೋಲ್ ಬಂಕ್ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಜುಲೈ 28 ರಂದು ಬೆಳಗ್ಗೆ ಹೋದವರು ಇಲ್ಲಿಯವರೆಗೆ ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಂದು ಮಗ ನೀಡಿದ ದೂರಿನ್ವಯ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.

ಕಾಣೆಯಾದ ವ್ಯಕ್ತಿ ಸದೃಡ ಮೈಕಟ್ಟು, ಸಾದಾಗೆಂಪು ಮೈ ಬಣ್ಣ, ದುಂಡನೆಯ ಮುಖ, ಅಂದಾಜು 5 ಫೀಟ್ 6 ಇಂಚ್ ಎತ್ತರ ಇದ್ದು, ನೀಲಿ ಬಣ್ಣದ ಟೀ ಶರ್ಟ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ ಧರಿಸಿರುತ್ತಾರೆ.

ಕಾಣೆಯಾದ ವ್ಯಕ್ತಿ ಕುರಿತು ಮಾಹಿತಿ ಅಥವಾ ಸುಳಿವು ಸಿಕ್ಕಲಿ ಯಾದಗಿರಿ ನಗರ ಪೊಲೀಸ್ ಠಾಣೆಗೆ ಅಥವಾ ಯಾದಗಿರಿ ಕಂಟ್ರೋಲ್ ರೂಂ  ದೂ.ಸಂ: 08473-253736, 251778 ಗೆ ಕರೆ ಸಂಪರ್ಕಿಸಲು ಪ್ರಕಟಣೆ ಕೋರಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...