ಮಂಗಳವಾರ, ಜೂನ್ 29, 2021

 *ವಿವಿಧ ಸಮುದಾಯಗಳ ಯೋಜನೆಗಳ ಫಲಾನುಭವಿಗಳ ಆಯ್ಕೆ*


ಯಾದಗಿರಿ: ಜೂನ್, 24 (ಕರ್ನಾಟಕ ವಾರ್ತಾ);

ಪ.ಜಾತಿ/ ಪ.ವರ್ಗಗಳ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶದ ಜನಾಂಗದವರಿಗೆ ಸಾಲ ಸೌಲಭ್ಯ ಕೋರಿ ಬಂದಿರುವ ಅರ್ಜಿಗಳ ಆಯ್ಕೆಯು  ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರ ಅಧ್ಯಕ್ಷತೆಯಲ್ಲಿ ಕಚೇರಿಯ ಸಭಾಂಗಣದಲ್ಲಿ  ಜರುಗಿತು.

 2020-21ನೇ ಸಾಲಿನ ಪರಿಶಿಷ್ಟ ಜಾತಿಯ ಅಲೆಮಾರಿ ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ, ಭೂ ಒಡೆತನ ಯೋಜನೆ, ನೇರಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ನಿವೇಶನ ವಸತಿ ಯೋಜನೆ ಮತ್ತು ಉದ್ಯಮ ಶೀಲತಾ ಯೋಜನೆಗೆ  ಕೋರಿ ಬಂದ ಅರ್ಜಿಗಳ ಆಯ್ಕೆ  ನಡೆಯಿತು.

169 ಭೂ ಒಡೆತನ ಯೋಜನೆ ಬಂದ ಅರ್ಜಿ  ಅದರಲ್ಲಿ 40  ಫಲಾನುಭವಿಗಳ ಆಯ್ಕೆ ,  
 ನೇರ ಸಾಲ ಯೋಜನೆ 551 ಅರ್ಜಿಗಳಲ್ಲಿ  ಅದರಲ್ಲಿ 159 ಫಲಾನುಭವಿಗಳ ಆಯ್ಕೆ, ಗಂಗಾ ಕಲ್ಯಾಣ ಯೋಜನೆಯ 60 ಅರ್ಜಿಗಳಲ್ಲಿ 60 ಆಯ್ಕೆ, ವಸತಿ ಯೋಜನೆಯ 1060 ಅರ್ಜಿಗಳಲ್ಲಿ 1060 ಆಯ್ಕೆ,  ಸ್ವಯಂ ಉದ್ಯೋಗ ಯೋಜನೆಯ 70 ಅರ್ಜಿಗಳಲ್ಲಿ 70 ಆಯ್ಕೆ, ಉದ್ಯಮ ಶೀಲತಾ ಯೋಜನೆಯ 403 ಅರ್ಜಿಗಳಲ್ಲಿ 28 ಆಯ್ಕೆ, ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಯ 11 ಅರ್ಜಿಗಳಲ್ಲಿ 3 ಫಲಾನುಭವಿಗಳ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ  ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಜಿಲ್ಲಾ ವ್ಯವಸ್ಥಾಪಕ ಎಸ್.ಎಚ್.ಪೂಜಾರಿ ಹಾಗೂ ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...