ಬುಧವಾರ, ಜೂನ್ 23, 2021

 ಯಾದಗಿರಿ ಜಿಲ್ಲೆ ಸಂಚಾರಿ ವ್ಯವಸ್ಥೆ; ಕರಡು ಅಧಿಸೂಚನೆ ಪ್ರಕಟ

ಯಾದಗಿರಿ;ಜೂನ್23 (ಕರ್ನಾಟಕ ವಾರ್ತಾ): ಜಿಲ್ಲೆಯ ಯಾದಗಿರಿ ನಗರ, ಶಹಾಪುರ ನಗರ, ಸುರಪುರ ನಗರ, ಗುರುಮಠಕಲ್ ಪಟ್ಟಣ, ಹುಣಸಗಿ ಪಟ್ಟಣ ಹಾಗೂ ಸೈದಾಪುರ ಪಟ್ಟಣಗಳಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಬಾರಿ ಸರಕು ವಾಹನ ಸಂಚಾರ ನಿಷೇಧ, ಏಕ ಮುಖ ಸಂಚಾರ ವ್ಯವಸ್ಥೆ, ಪಾರ್ಕಿಂಗ್ ಸ್ಥಳ ಕುರಿತು ಕರಡು ಅಧಿಸೂಚನೆ ಹೊರಡಿಸಲಾಗಿದೆ.

ಇತ್ತೀಚಿನ ಕೆಲ ದಿನಗಳಲ್ಲಿ ವಾಹನಗಳ ನಿಗಧಿತ ವೇಗಕ್ಕಿಂತ ಅತಿ ವೇಗದಿಂದ ಸಂಚರಿಸಿ ಮಾರಣಾಂತಿಕ ಅಪಘಾತಗಳು ಸಂಭವಿಸಿದ ಹಿನ್ನಲೆಯಲ್ಲಿ ಯಾದಗಿರಿ ನಗರ ವ್ಯಾಪ್ತಿಯಲ್ಲಿ ಮತ್ತು ರಿಂಗ್ ರಸ್ತೆಯ ವಾಹನಗಳ ನಿಗದಿತ ವೇಗಕ್ಕಿಂತ ಅತಿಹೆಚ್ಚು ವೇಗದಿಂದ ಸಂಚರಿಸಿ ಮಾರಣಾಂತಿಕ ಅಪಘಗಳು ಸಂಭವಿಸಿದ ಹಿನ್ನಲೆಯಲ್ಲಿ ಯಾದಗಿರಿ ನಗರ ವ್ಯಾಪ್ತಿಯಲ್ಲಿ ಮತ್ತು ರಿಂಗ್ ರಸ್ತೆಯ ವಾಹನಗಳ ವೇಗವನ್ನು 50ಕಿ,ಮೀ ಪ್ರತಿ ಗಂಟೆಗೆ ನಿರ್ಬಂಧಿಸಿ ಮೋಟಾರು ವಾಹನ ಕಾಯ್ದೆ 1988 ರ ನಿಯಮ 112, ಕರ್ನಾಟಕ ಮೋಟಾರು ವಾಹನ ಕಾಯ್ದೆ 1989 ನಿಯಮ 221(ಎ)ರ ಅನುಸಾರ ಅಧಿಕಾರ ಚಲಾಯಿಸಿ ಕರಡು ಅಧಿಸೂಚನೆಯನ್ನು ಹೊರಡಿಸಿದೆ.

** ಕರಡು ಅಧಿಸೂಚನೆಯ ವಿವರ ಈ ರೀತಿ ಇದೆ **

ಯಾದಗಿರಿ ನಗರದ ಈ ಕೆಳಕಂಡ ಸ್ಥಳಗಳಲ್ಲಿ  ಬೆಳಗ್ಗೆ 8 ಗಂಟೆಯಿAದ 12 ಗಂಟೆಯ ವರೆಗೆ ಹಾಗೂ ಸಾಯಂಕಾಲ 4 ಗಂಟೆಯಿAದ ರಾತ್ರಿ 8 ಗಂಟೆಯ ವರೆಗೆ ಭಾರಿ ವಾಹನಗಳನ್ನು ಕಡ್ಡಾಯವಾಗಿ ಪ್ರವೇಶ ನಿರ್ಬಂಧಿಸಲಾಗಿದೆ.

1. ಹೈದ್ರಾಬಾದ್ ರಾಷ್ಟಿçÃಯ ರಸ್ತೆಯ ಂPಒಅ ಗಂಜ್ ವೃತ್ತದಿಂದ ಮೈಲಾಪೂರ ದಿಂದ ಬೇಸ್‌ದಿಂದ ಚಕ್ರಕಟ್ಟಾದಿಂದ ಗಾಂಧಿ ಚೌಕ್‌ದಿಂದ ಹತ್ತಿಕುಣಿ ರಸ್ತೆ, ಹಿಮ್ಮುಖವಾಗಿ ಅದೇ ಮಾರ್ಗ 

2. ಜಿಲ್ಲಾಧಿಕಾರಿಗಳ ಕಚೇರಿ ಮತ್ತು ರೇಲ್ವೆಸ್ಟೇಷನ್ ರಸ್ತೆಯ ವರ್ತುಲ ರಸ್ತೆ ದಿಂದ ಜಿಲ್ಲಾ ಪಂಚಾಯತ್, ಸಪ್ನಾ ಟಾಕೀಸ್ ಮತ್ತು ಗಾಂಧಿಚೌಕ್ ಹಿಮ್ಮುಖವಾಗಿ ಅದೇ ಮಾರ್ಗ

3. ಚಿತ್ತಾಪೂರ ವಾಡಿ ರಸ್ತೆಯ ಡಿಡಿಪಿಐ ಕಛೇರಿ ಯಿಂದ ಸಪ್ನಾಟಾಕೀಸ್ ಗಾಂಧಿ ಚೌಕ್ ಹಿಮ್ಮುಖವಾಗಿ ಅದೇ ಮಾರ್ಗ.


ಯಾದಗಿರಿಯಲ್ಲಿ ವಾಹನಗಳು ನಿಲುಗಡೆ ನಿಷೇಧ ಸ್ಥಳಗಳು 

ನತ್ತು ಹೊಟೇಲ್ ಮುಂದಿನ ರಸ್ತೆಯ ಬದಿಯಲ್ಲಿ ಹಾಗೂ ಯಾದಗಿರಿ ನಗರದ ಗಾಂಧಿ ಚೌಕ್ ಮೂರ್ತಿಯ ಹತ್ತಿರದ ಸುತ್ತಮುತ್ತಲಿನ ಸ್ಥಳ

ಶಹಾಪೂರದಲ್ಲಿ  ವಾಹನಗಳು ನಿಲುಗಡೆ ನಿಷೇಧ ಸ್ಥಳ 

ಶಹಾಪೂರ ನಗರದ ಹಳೆ ಬಸ್ ನಿಲ್ದಾಣ ಎರಡು ಬದಿಗೆ 50 ಮೀಟರ ಅಂತರದಲ್ಲಿ ನೋ ಪಾರ್ಕಿಂಗ್ ವ್ಯವಸ್ಥೆ.

ಬಸವೇಶ್ವರ ವೃತ್ತದಿಂದ ಯಾದಗಿರಿ ರಸ್ತೆಯಲ್ಲಿ 100 ಮೀಟರ್ ಅಂತರದಲ್ಲಿ ನೋ ಪಾರ್ಕಿಂಗ್ ವ್ಯವಸ್ಥೆ.

ಬಸವೇಶ್ವರ ವೃತ್ತದಿಂದ ಸುರಪುರ ರಸ್ತೆಯ 50 ಮೀಟರ್ ಅಂತರದವರೆಗೆ ಸ್ವಾಮಿ ಪೆಟ್ರೋಲ್ ಬಂಕ ವರೆಗೆ ನೋ ಪಾರ್ಕಿಂಗ್ ವ್ಯವಸ್ಥೆ.

ಸುರಪೂರ 

ಗಾಂಧಿ ವೃತ್ತದಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ


ಏಕ ಮುಖ ಸಂಚಾರ ವ್ಯವಸ್ಥೆ 

ಯಾದಗಿರಿ ಹಳೆ ಎಸ್,ಬಿ,ಐ,ಬ್ಯಾಂಕ್ ಯಿಂದ ಗಾಂಧಿ ಚೌಕ್‌ವರೆಗೆ  

ಗುರುಮಿಠಕಲ್ ಕಾಕಲವಾರ ಕ್ರಾಸ್ ಯಿಂದ ಕೆ.ಜಿ.ಬಿ.ಬ್ಯಾಂಕ್‌ವರೆಗೆ 

ಸೈದಾಪೂರ ಕನಕದಾಸ ವೃತ್ತದಿಂದ ಬಸವೇಶ್ವರ ವೃತ್ತವರೆಗೆ 



ಸಮ ಮತ್ತು ಬೆಸ್ ದಿನಗಳಂತೆ ವಾಹನ ನಿಲುಗಡೆ ಸ್ಥಳ 

ಯಾದಗಿರಿ ಸುಭಾಷ ಸರ್ಕಲ್ ಯಿಂದ ಸರ್ಕಾರಿ ಡಿಗ್ರಿ ಕಾಲೇಜ್

ಸುಭಾಷ ಸರ್ಕಲ್ ಯಿಂದ ಶಾಸ್ತಿç ಚೌಕ್ ಮತ್ತು ಸುಭಾಷ ಸರ್ಕಲ್ ಶಹಾಪೂರ ರಸ್ತೆ ಬ್ರಿಡ್ಜ್

ಗುರಮಿಠಕಲ್ ಬಸವೇಶ್ವರ ಸರ್ಕಲ್ ಯಿಂದ ನಗರೇಶ್ವರ ಮಂದಿರ ವರಿಗೆ

ಸೈದಾಪೂರ ಬಸವೇಶ್ವರ ಸರ್ಕಲ್ ಯಿಂದ ರೇಲ್ವೆ ಸ್ಟೇಷನ್‌ವರಿಗೆ 

ಶಹಾಪೂರ ಬಸವೇಶ್ವರ ಸರ್ಕಲ್ ಯಿಂದ ಮಾಚಗಾರಗಡ್ಡಿ ವರಿಗೆ 

ಸುರಪೂರ ಗಾಂಧಿ ಸರ್ಕಲ್ ಯಿಂದ ಮೂರ್ತಿಕಟ್ಟಾವರಿಗೆ 

ಹುಣಸಗಿ ಕರ್ನಾಟಕ ಬ್ಯಾಂಕ್ ಯಿಂದ ವಾಲ್ಮೀಕಿ ಸರ್ಕಲ್ ವರೆಗೆ 


ವಾಹನ ನಿಲುಗಡೆ ಸ್ಥಳಗಳು-:

ದ್ವಿಚಕ್ರ ವಾಹನ : ಯಾದಗಿರಿ ನಗರದ ಎಸ್.ಎಸ್. ಪ್ಯಾರಸಾಬಾದಿ ಅಂಗಡಿಯಿAದ ಚಕ್ರಕಟ್ಟಾ ಕ್ರಾಸ್ ವರಿಗೆ ಮತ್ತು ನಾಹರ ಬಟ್ಟೆ ಅಂಗಡಿಯಿAದ ಚಕ್ರಕಟ್ಟಾ ಕ್ರಾಸ್‌ವರಿಗೆ  ಮಾತ್ರ ದ್ವಿಚಕ್ರ ವಾಹನ ನಿಲುಗಡೆ ಸ್ಥಳವಾಗಿದೆ.

ಆಟೋ ನಿಲುಗಡೆ : ಯಾದಗಿರಿ ನಗರದ ನಗರ ಪೊಲೀಸ್ ಠಾಣೆಯ ಪಂಪ ಮಹಾಕವಿಯ ಮುಂದಿನ ಸ್ಥಳದಲ್ಲಿ ಹಾಗೂ ಗಂಜ್ ವೃತ್ತದಿಂದ ಮೈಲಾಪೂರ ಬೇಸ್‌ಗೆ ಹೋಗುವ ರಸ್ತೆಯ ಎಡ ಭಾಗಕ್ಕೆ ಆಟೋ ನಿಲುಗಡೆ ಸ್ಥಳ ಗುರುತಿಸಲಾಗಿದೆ.

     ಈ ಕರಡು ಅಧಿಸೂಚನೆಯ ಕುರಿತು ಆಕ್ಷೇಪಣೆ, ಸಲಹೆ ಮತ್ತು ಸೂಚನೆಗಳು ಏನಾದರೂ ಇದ್ದಲ್ಲಿ ಸದಸ್ಯ ಕಾರ್ಯದರ್ಶಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಯಾದಗಿರಿ ಇವರಿಗೆ ಸಲ್ಲಸಬಹುದಾಗಿದೆ. ಎಂದು ಯಾದಗಿರಿ ಆರ್‌ಟಿಓ ಪ್ರಕಟಣೆ ತಿಳಿಸಿದೆ.


  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...