ಶನಿವಾರ, ಏಪ್ರಿಲ್ 17, 2021

 ಏಪ್ರಿಲ್ 22ರ ವರೆಗೆ ಮಾವು ಫಸಲಿನ ಇ-ಹರಾಜು

ಯಾದಗಿರಿ,ಏಪ್ರಿಲ್17(ಕ.ವಾ):- 2020-21 ನೇ ಸಾಲಿನಲ್ಲಿ ಯಾದಗಿರಿ ಜಿಲ್ಲೆಯ ನಾರಾಯಣಪೂರ ತೋಟಗಾರಿಕೆ ಕ್ಷೇತ್ರದ ಮಾವು ಫಸಲಿನ ಇ-ಹರಾಜು ಮೂಲಕ ವಿಲೇವಾರಿ ಮಾಡಲು ಏಪ್ರಿಲ್ 15 ರ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿದ್ದು, ಏಪ್ರಿಲ್ 22 ರಂದು ಬೆಳಿಗ್ಗೆ 11 ಗಂಟೆಗೆ ಮುಕ್ತಾಯಗೊಳ್ಳುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಾರಾಯಣಪೂರ ತೋಟಗಾರಿಕೆ ಕ್ಷೇತ್ರದ ಮಾವು ಫಸಲಿನ ಠೇವಣಿ ಮೊತ್ತ 9,800 ರೂ ಅಗಿದ್ದು,  ಇ-ಹರಾಜು ಮೊತ್ತವು ಇಲಾಖಾ ಅಂದಾಜು ಮೊತ್ತಕ್ಕಿಂತ ಕಡಿಮೆ ಇದ್ದಲ್ಲಿ ಅಥವಾ ಬಿಡ್ಡು ಆಗದಿದ್ದಲ್ಲಿ ಮರು ಇ-ಹರಾಜು ಏಪ್ರಿಲ್ 22 ರ ಸಂಜೆ 5 ಗಂಟೆಗೆ ಪ್ರಾರಂಭವಾಗಿ 26 ರ ಬೆಳಿಗ್ಗೆ 11 ಗಂಟೆಗೆ ಮುಕ್ತಾಯಗೊಳ್ಳುವುದು.


ಬಿಡ್ಡಿನ ಡೆಲ್ಟಾ ಟೈಂ 5 ನಿಮಿಷ ಇರುತ್ತದೆ. ಇ-ಹರಾಜು ನಲ್ಲಿ ಭಾಗವಹಿಸುವವರು ಮೇಲೆ ನಮೂದಿಸಿರುವ ತೋಟಗಾರಿಕೆ ಕ್ಷೇತ್ರಕ್ಕೆ ಇ-ಪೋರ್ಟಲ್ ಖಾತೆಯಲ್ಲಿ ಠೇವಣಿ ಮೊತ್ತವನ್ನು ಆನ್‌ಲೈನ್ ಮೂಲಕ ಅಥವಾ ಚಲನ್ ತೆಗೆದುಕೊಂಡು ತುಂಬಬೇಕು.

ಹೆಚ್ಚಿನ ಮಾಹಿತಿಗೆ ದೂ.9620578551 ಮತ್ತು 9880139467 ಹಾಗೂ ವೆಬ್‌ಸೈಟ್ ತಿತಿತಿ.eಠಿಡಿoಛಿ.ಞಚಿಡಿಟಿಚಿಣಚಿಞಚಿ.gov.iಟಿ ಅನ್ನು ಸಂಪರ್ಕಿಸಿ ಎಂದು ಅವರು ತಿಳಿಸಿದ್ದಾರೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...