ಮಂಗಳವಾರ, ಫೆಬ್ರವರಿ 28, 2017

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಗಾಥೆ ಧ್ವನಿ-ಬೆಳಕಿನಲ್ಲಿ ಅನಾವರಣ ನೋಡುಗರನ್ನು ಮಂತ್ರಮುಗ್ಧವಾಗಿಸಿದ “ಭಾರತ ಭಾಗ್ಯ ವಿಧಾತ” ರೂಪಕ

ಯಾದಗಿರಿ, ಫೆಬ್ರವರಿ,25 (ಕರ್ನಾಟಕ ವಾರ್ತೆ): ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಇಡೀ ಜೀವನ ಚರಿತ್ರೆಯನ್ನ “ಧ್ವನಿ-ಬೆಳಕು” ದೃಶ್ಯ ವೈಭವದಲ್ಲಿ ಅನಾವರಣಗೊಂಡಿತು. ಹೌದು, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಇದಕ್ಕೆ ಸಾಕ್ಷಿಯಾಯಿತು. 
ಅಂಬೇಡ್ಕರ್ ಅವರು ಜನ್ಮ ದಿನದ ವರ್ಷಾಚರಣೆ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಭಾರತ ಭಾಗ್ಯ ವಿಧಾತ “ಧ್ವನಿ-ಬೆಳಕು” ಕಾರ್ಯಕ್ರಮ ಜನಸಾಗರದ ಮನಸೊರೆಗೊಳಿಸಿತು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಅನುಭವಿಸಿದ ಅಮಾನವೀಯ ಘಟನೆಗಳು, ಸಮಾಜಕ್ಕೆ ಪೆಡಂಭೂತವಾಗಿ ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ಮೆಟ್ಟಿನಿಂತು “ಭಾರತ ಭಾಗ್ಯ ವಿಧಾತ”ರಾಗಿ ಬೆಳೆದ ಪರಿಯನ್ನು 80ಕ್ಕೂ ಹೆಚ್ಚು ಕಲಾವಿದರು ಧ್ವನಿ-ಬೆಳಕಿನ ಮೂಲಕ ಜನರ ಕಣ್ಣಿಗೆ ಕಟ್ಟುವಂತೆ ಸಾದರ ಪಡಿಸಿದರು. 
ಸ್ತ್ರೀ ಶಿಕ್ಷಣ, ಸ್ತ್ರೀಯರಿಗೆ ಸಮಾನ ಆಸ್ತಿ ಹಕ್ಕು, ಹೆರಿಗೆ ರಜೆ, ಮಹಿಳೆಯರ ರಕ್ಷಣೆಗಾಗಿ ಕಾನೂನು ರೂಪಣೆ, 8 ತಾಸಿನ ದುಡಿಮೆ ಪದ್ಧತಿ ಜಾರಿ, ಭ್ರೂಣಹತ್ಯೆ ನಿಷೇಧ, ಅಸ್ಪøಶ್ಯತೆ ನಿವಾರಣೆಯಲ್ಲಿ ವಹಿಸಿದ್ದ ದಿಟ್ಟತನದೊಂದಿಗೆ ಭಾರತದ ಆರ್ಥಿಕ ವ್ಯವಸ್ಥೆ ಸಬಲೀಕರಣಕ್ಕೆ ಪೂರಕವಾದ ಭಾರತದ ಅವಧೂತ ಅಂಬೇಡ್ಕರ್ ನೀಡಿದ ಯೋಜನೆಗಳನ್ನು ಪೂರ್ತಿ ಕಾರ್ಯಕ್ರಮ ಬಿತ್ತರಿಸಿತು.
ಧ್ವನಿಗೆ ಅನುಸಾರವಾಗಿ ವೇದಿಕೆ ಹಿಂದಿನ ಪರದೆಯಲ್ಲಿ ಮೊಳಗುವ ದೃಶ್ಯಗಳು, ಸನ್ನಿವೇಶಗಳ ಮರುಸೃಷ್ಟಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಗೀಗಿಪದ, ಭೂತದ ಕೋಲ, ಡೊಳ್ಳು-ಕುಣಿತ, ಪುರವಂತರ ನೃತ್ಯ, ಜೋಗತಿ ಪದಗಳು ಹೀಗೆ ಜನಪದ ಪ್ರಕಾರಗಳು ಮೂಡಿಬಂದವು. ಕಾರ್ಯಕ್ರಮದುದ್ದಕ್ಕೂ ಅಂಬೇಡ್ಕರ್ ಅವರ ಬಾಲ್ಯ, ಹರೆಯ, ಶಿಕ್ಷಣ, ಹೋರಾಟ ಹಾಗೂ ತಲ್ಲಣದೊಂದಿಗೆ ಬುದ್ಧನ ಅಹಿಂಸಾ ತತ್ವದ ಪ್ರಚಾರಕರಾಗಿ, ಜಾತಿ ವಿನಾಶದ ಹೆಜ್ಜೆ ಇರಿಸಿದ ಅಂಬೇಡ್ಕರ್‍ರ ಜೀವನಗಾಥೆಯ ಪ್ರತಿಯೊಂದು ಹಂತವನ್ನೂ ರೂಪಕ ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಯಿತು. 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಶ್ರೀ ಎನ್.ಆರ್.ವಿಶುಕಮಾರ್ ಅವರ ಪರಿಕಲ್ಪನೆಯ ಈ ರೂಪಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಶ್ರೀ ಶಶಿಧರ್ ರೆಡ್ಡಿ ಹೊಸಳ್ಳಿ, ಉಪಾಧ್ಯಕ್ಷರಾದ ಶ್ರೀ ಸ್ಯಾಮಸನ್ ಮ್ಯಾಳಿಕೇರಿ, ನಗರಸಭೆ ಸದಸ್ಯರಾದ ಶ್ರೀ ಮರೆಪ್ಪ ಚಟ್ಟರಕರ, ಅಪರ ಜಿಲ್ಲಾಧಿಕಾರಿ ಡಾ|| ಬಿ.ಸಿ. ಸತೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಸಿದ್ದೇಶ್ವರಪ್ಪ. ಜಿ.ಬಿ, ತಹಶೀಲ್ದಾರರಾದ ಶ್ರೀ ಚನ್ನಮಲ್ಲಪ್ಪ ಘಂಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರರಾದ ಶ್ರೀಮತಿ ಅನಿತಾ ಸಜ್ಜನ್ ಕಾರ್ಯಕ್ರಮ ನಿರೂಪಿಸಿದರು.

ಭಾರತ ಭಾಗ್ಯ ವಿಧಾತ ಧ್ವನಿ-ಬೆಳಕು ರೂಪಕ ಬಲು ಸುಂದರ: ಶಾಸಕ ಡಾ|| ಎ.ಬಿ ಮಾಲಕರೆಡ್ಡಿ ಬಣ್ಣನೆ
*******************************************************************************************
ಯಾದಗಿರಿ, ಫೆಬ್ರವರಿ, 25 (ಕರ್ನಾಟಕ ವಾರ್ತೆ): ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ “ಭಾರತ ಭಾಗ್ಯ ವಿಧಾತ ಧ್ವನಿ-ಬೆಳಕು” ರೂಪಕ ಬಲು ಸುಂದರ ಶಾಸಕರಾದ ಡಾ|| ಎ.ಬಿ ಮಾಲಕರೆಡ್ಡಿ ಅವರು ಬಣ್ಣನೆ ಮಾಡಿದ್ದಾರೆ. 
ತಮಟೆ ಭಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರದರ್ಶನವನ್ನು ಸಂಪೂರ್ಣವಾಗಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಅಂಬೇಡ್ಕರ್ ಜೀವನವೇ ಅದ್ಭುತ. ಸಮಾಜದ ಅನಿಷ್ಠ ಪದ್ಧತಿಗಳ ವಿರುದ್ಧ ಹೊರಾಡಿ ಕಾನೂನು ರೂಪಿಸಿದ್ದಾರೆ. ನಾವೆಲ್ಲ್ಲಾ ಒಂದೇ ತಾಯಿಯ ಮಕ್ಕಳಾಗಬೇಕೆಂಬ ಸಂದೇಶವನ್ನು ಅಂಬೇಡ್ಕರ್ ಅವರು ನೀಡಿದ್ದಾರೆ ಎಂದು ಗುಣಗಾನ ಮಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಇಂತಹ ಕಾರ್ಯಕ್ರಮಗಳು ಜನರ ಹೃದಯ ಬದಲಾಯಿಸುವಂತಾಗಬೇಕು ಎಂದು ಅವರು ಪ್ರತಿಪಾದಿಸಿದರು.


ನಗರಸಭೆ ಅಧ್ಯಕ್ಷರಿಂದ ಕಲಾವಿದರಿಗೆ 25,000 ರೂಪಾಯಿ ನಗದು ಬಹುಮಾನ ನೀಡಿಕೆ

ಯಾದಗಿರಿ, ಫೆಬ್ರವರಿ, 25 (ಕರ್ನಾಟಕ ವಾರ್ತೆ): ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿರುವ “ಭಾರತ ಭಾಗ್ಯ ವಿಧಾತ ಧ್ವನಿ-ಬೆಳಕು” ಕಾರ್ಯಕ್ರಮ ವೀಕ್ಷಿಸಿ ಸಂತುಷ್ಟರಾದ ನಗರಸಭೆ ಅಧ್ಯಕ್ಷರಾದ ಶ್ರೀ ಶಶಿಧರ್ ರೆಡ್ಡಿ ಹೊಸಳ್ಳಿ ಅವರು, ಪ್ರರ್ದಶನ ತೋರಿದ ಕಲಾವಿದರಿಗೆ 25 ಸಾವಿರ ರೂಪಾಯಿ ನಗದು ಬಹುಮಾನ ನೀಡಿದರು.
ಶಾಸಕ ಡಾ|| ಎ.ಬಿ ಮಾಲಕರೆಡ್ಡಿ ಅವರು ನಗರಸಭೆ ಅಧ್ಯಕ್ಷರ 25,000ರೂಪಾಯಿ ನಗದು ಬಹುಮಾನವನ್ನು ಕಲಾವಿದರಿಗೆ ಹಸ್ತಾಂತರಿಸಿದರು. 
ಯಾದಗಿರಿಯ ಮಹಾಜನತೆ ಪರವಾಗಿ ನಗದು ಬಹುಮಾನವನ್ನು ನೀಡುÀÅದಾಗಿ ನಗರಸಭೆ ಅಧ್ಯಕ್ಷರಾದ ಶ್ರೀ ಶಶಿಧರ್ ರೆಡ್ಡಿ ಹೊಸಳ್ಳಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...